ರೈತರ ಆತ್ಮವಿಶ್ವಾಸ ಪ್ರೇರಕ ಹಾರಕ
Posted onಹಾವೇರಿಯ ಸಂಗೂರು ಗ್ರಾಮದ ಚಂದ್ರಕಾಂತ್ ಸಂಗೂರು ಹಾರಕ ಕೃಷಿಯಲ್ಲಿ ಪಳಗಿದವರು. ಮಳೆಯ ಅಭಾವ ಹಾವೇರಿಯಲ್ಲಿ ಪ್ರತೀ ವರ್ಷ ಮರುಕಳಿಸುವುದು ಸರ್ವೇ ಸಾಮಾನ್ಯ.
ಹಾವೇರಿಯ ಸಂಗೂರು ಗ್ರಾಮದ ಚಂದ್ರಕಾಂತ್ ಸಂಗೂರು ಹಾರಕ ಕೃಷಿಯಲ್ಲಿ ಪಳಗಿದವರು. ಮಳೆಯ ಅಭಾವ ಹಾವೇರಿಯಲ್ಲಿ ಪ್ರತೀ ವರ್ಷ ಮರುಕಳಿಸುವುದು ಸರ್ವೇ ಸಾಮಾನ್ಯ.
ಮಳೆ ಬಿದ್ದು ಬೆಳೆದು ನಿಂತ ಫಸಲೆಲ್ಲಾ ಭೂಮಿ ಪಾಲಾದರೆ ರೈತರಿಗಾಗುವ ಸಂಕಷ್ಟ ಅಷ್ಟಿಷ್ಟಲ್ಲ. ಶ್ರಮವಹಿಸಿ ದುಡಿದು ಕಾಲಕಾಲಕ್ಕೆ ಗೊಬ್ಬರ, ಔಷಧಿಗಳನ್ನು ಸಿಂಪಡಿಸಿ ಫಸಲು ಕೊಯ್ಲಿಗೆ ಬಂದಾಗ ಹಾನಿಯಾದರೆ ದುಖಃ ಸಹಜವೇ. ಆದರೆ ಸಿರಿಧಾನ್ಯ ಬೆಳೆದರೆ ಇಂತಹ ದುಃಖ ಪಡುವ ಅಗತ್ಯವೇ ಎದುರಾಗುವುದಿಲ್ಲ ಎನ್ನುತ್ತಾರೆ ಹಾವೇರಿ ತಾಲೂಕಿನ ಸಂಗೂರು ಗ್ರಾಮದ ಮಂಜುನಾಥ ಹೆಗ್ಗಣ್ಣನವರ್. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರಾದ ಇವರು ಯೋಜನೆಯ ನೆರವಿನಿಂದ ಸಿರಿಧಾನ್ಯ ಕೃಷಿ ಮಾಡುತ್ತಿದ್ದಾರೆ.