ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಗಲಕೋಟೆ ನವನಗರದ ಜಿಲ್ಲಾ ಕಛೇರಿಯಲ್ಲಿ ಕಾಗದದಿಂದ ತಯಾರಿಸಲಾಗುವ ಬ್ಯಾಗ್ ಕವರ್ ಮುಂತಾದ ವಸ್ತುಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಫೆಬ್ರವರಿ 20 ರಂದು ಉದ್ಘಾಟಿಸಲಾಯಿತು.
ತಮ್ಮ ಉದ್ಘಾಟನಾ ಭಾಷಣದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ, ಕಾರ್ಮಿಕರ ಸಂಘದ ಅಧ್ಯಕ್ಷ ರಾಜು ನಾಯ್ಕ ಮಹಿಳೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಸಾಮಥ್ರ್ಯ ಸಾಬೀತುಪಡಿಸಿದ್ದಾಳೆ. ಶ್ರೀ ಕ್ಷೇತ್ರದ ಯೋಜನೆ ಮಹಿಳೆಯರ ಪಾಲಿಗೆ ದಾರಿದೀಪವಾಗಿದೆ ಎಂದರು. ನಗರಸಭಾ ಸದಸ್ಯೆ ಭಾರತಿ ಕೂಡಗಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ನಿರ್ದೆಶಕ ಶಂಕರ ಶೆಟ್ಟಿ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎರಡು ದಿನಗಳ ಪೇಪರ್ ಬ್ಯಾಗ್ ತಯಾರಿಕಾ ತರಬೇತಿಯಲ್ಲಿ 50 ಮಂದಿ ಮಹಿಳೆಯರು ಭಾಗವಹಿಸಿದ್ದರು. ಶೈಲಜಾ ಮತ್ತು ಜ್ಯೋತಿ ತರಬೇತಿ ನೀಡಿದರು.