ತಿಂಡಿ ಮಾರಾಟ ತಂದ ಯಶಸ್ಸು
Posted onಕಷ್ಟದಿಂದ ಪಾರಾಗಲು ಕೈಸಾಲ ಮಾಡಿ ಕೈಸುಟ್ಟುಕೊಂಡವರೆಷ್ಟೊ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಜ್ಯೋತಿ ಕೂಡ ಕೈಸಾಲದ ಸುಳಿಯಲ್ಲಿ ಸಿಲುಕಿದ್ದರು. ಪತಿ ಪಂಚಾಕ್ಷರಿಯವರು ಖಾಸಗಿ ಬಸ್ ನಿರ್ವಾಹಕರಾಗಿದ್ದರೂ ಜೀವನದ ಬಂಡಿ ಸಾಗುವುದೇ ಕಷ್ಟವಾಗಿತ್ತು. ಇಂತಹ ಸ್ಥಿತಿಯಲ್ಲಿ ಅವರ ನೆರವಿಗೆ ಬಂದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ವ- ಉದ್ಯೋಗದ ಆಲೋಚನೆ. ಮದ್ದೂರು ತಾಲೂಕಿನ ಬೆಸಗರಹಳ್ಳಿ ವಲಯದ (ಕಾರ್ಯಕ್ಷೇತ್ರ) ಜ್ಞಾನವಿಕಾಸ ಕೇಂದ್ರದ ಕೈವಲ್ಯರಾಮೇಶ್ವರ ತಂಡದ ಸದಸ್ಯೆಯಾದ ಜ್ಯೋತಿ, ಮೊದಲು ಮಾಡಿದ ಕೆಲಸವೆಂದರೆ ಯೋಜನೆಯಿಂದ ರೂ. 5000 ಸಾಲ […]