ಉಜಿರೆ, ಫೆ.28 : “ಮನುಷ್ಯನಿಗೆ ಬರುವ ಒಳ್ಳೆಯ ಕ್ಷಣಗಳು, ಕೆಟ್ಟ ಕ್ಷಣಗಳು ಅವರವರ ಭವಿಷ್ಯದ ಮೇಲೆ ವಿಶೇಷವಾದ ಪರಿಣಾಮವನ್ನು ಬೀರುತ್ತದೆ. ಒಳ್ಳೆಯ ಕ್ಷಣಗಳಿಂದ ಬದುಕು ಕಟ್ಟಿಕೊಂಡರೆ, ಕೆಟ್ಟ ಕ್ಷಣಗಳಿಂದ ಮತಿಭ್ರಮಣೆಯಾಗಿ ದಿಕ್ಕು ದೆಸೆಯಿಲ್ಲದೆ ಕಂಗಾಲಾಗಿ ಬದುಕು ನಾಶವಾಗುತ್ತದೆ. ಪರಿವರ್ತನೆ ಲೋಕದ ಉಪಕಾರಕ್ಕಾಗಿಯಲ್ಲ. ನಾವು ಬದಲಾದಾಗ ಸಮಾಜ ನಮ್ಮನ್ನು ನೋಡುತ್ತದೆಯೇ ವಿನಹ ಪ್ರಮಾಣಪತ್ರ ಅಥವಾ ಹೆಗ್ಗಳಿಕೆ ವ್ಯಕ್ತಪಡಿಸುವುದಿಲ್ಲ. ಪ್ರಾಣಿ ಪಕ್ಷಿಗಳು ಬದುಕುವ ವಿಚಾರದಲ್ಲಿ ನಿರ್ಧಾರ ಬದಲಾಯಿಸುವುದಿಲ್ಲ. ವ್ಯಸನದಿಂದ ರಕ್ತಪಾತ, ಪ್ರಾಣಹಾನಿ, ಅಪಘಾತ, ಸೋಲು ಸ್ವಾಭಾವಿಕ. ಜಾತಿ, ಮತ, ಸಂಪ್ರದಾಯಗಳನ್ನು ಮೀರಿದ್ದೇ ಈ ವ್ಯಸನ. ಹಣ ಖರ್ಚು ಮಾಡಿ ಸೋಲು ಖರೀದಿಸುವುದೇ ಇದರ ಉದ್ದೇಶ. ಆದುದರಿಂದ ಯಾವುದೇ ವ್ಯಸನಿಗಳು ಆತ್ಮಸಾಕ್ಷಿಗೆ ಸರಿಯಾಗಿ ಚಟಮುಕ್ತರಾಗಬೇಕು” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾಹಿತಿ ನೀಡಿದರು. ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ಉಜಿರೆಯ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆಸಲ್ಪಟ್ಟ 131ನೇ ವಿಶೇಷ ಮದ್ಯವರ್ಜನ ಶಿಬಿರದ 62 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿಬಿರದಲ್ಲಿ ರಾಜ್ಯದ ವಿವಿಧೆಡೆಯಿಂದ ಶಿಬಿರಾರ್ಥಿಗಳು ಆಗಮಿಸಿದ್ದು, ಅತೀ ಹೆಚ್ಚು ಬೆಂಗಳೂರಿನವರಾಗಿದ್ದರು. ಈ ಶಿಬಿರದಲ್ಲಿ ಇಂಜಿನಿಯರುಗಳು 4, ಜಮೀನ್ದಾರರು 10, ಸ್ವ ಉದ್ಯೋಗಿಗಳು 10, ಸರಕಾರಿ ನೌಕರರು 6 ಮಂದಿ ಹಾಗೂ ಇನ್ನಿತರ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡವರು ಭಾಗವಹಿಸಿದ್ದರು. ವೇದಿಕೆಯ ಮೂಲಕ 1328 ಸಮುದಾಯ ಮದ್ಯವರ್ಜನ ಶಿಬಿರಗಳು ರಾಜ್ಯಾದ್ಯಂತ ನಡೆಯುತ್ತಿದ್ದು, ಬಹುತೇಕ 1.05 ಲಕ್ಷ ಜನರಿಗೆ ವ್ಯಸನಮುಕ್ತರಾಗಿ ಬಾಳ್ವೆ ನಡೆಸಲು ಸಹಕಾರಿಯಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 161 ಶಿಬಿರಗಳನ್ನು ರಾಜ್ಯಾದ್ಯಂತ ನಡೆಸಲಾಗುವುದೆಂದು ವೇದಿಕೆಯ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್ ತಿಳಿಸಿದರು. ಶಿಬಿರದಲ್ಲಿ ಯೋಜನಾಧಿಕಾರಿಗಳಾದ ಶ್ರೀ ತಿಮ್ಮಯ್ಯ ನಾಯ್ಕ, ಶ್ರೀ ಗಣೇಶ್ ಆಚಾರ್ಯ, ಶ್ರೀ ಭಾಸ್ಕರ ಎನ್., ಆರೋಗ್ಯ ಸಹಾಯಕ ಶ್ರೀ ವೆಂಕಟೇಶ್ ರವರು ಉಪಸ್ಥಿತರಿದ್ದರು. ಮುಂದಿನ ವಿಶೇಷ ಶಿಬಿರವು ದಿನಾಂಕ:18.03.2019 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.
ಆತ್ಮಸಾಕ್ಷಿಗೆ ಸರಿಯಾಗಿ ವ್ಯಸನಮುಕ್ತರಾಗಬೇಕು – ಡಾ| ಡಿ. ವೀರೇಂದ್ರ ಹೆಗ್ಗಡೆಯವರು

2 thoughts on “ಆತ್ಮಸಾಕ್ಷಿಗೆ ಸರಿಯಾಗಿ ವ್ಯಸನಮುಕ್ತರಾಗಬೇಕು – ಡಾ| ಡಿ. ವೀರೇಂದ್ರ ಹೆಗ್ಗಡೆಯವರು”
ನನ್ನ ಹೆಸರು ಲೋಕೇಶ್ . ಎಚ್ .ಆರ್
ನಾನು 2016 ರಲ್ಲಿ ಬಿ ಕಾಂ ಪದವಿಯನ್ನು ಪ್ರಥಮ ಶ್ರೆಣಿಯಲ್ಲಿ ಉತ್ತೀರ್ಣ ನಾಗಿದ್ದು. ನಾನು ಉದ್ಯೋಗದಿಂದ ವಂಚಿತನಾಗಿದ್ದೇನೇ . ನಾನು ಗ್ರಾಮೀಣ ಭಾಗದಲ್ಲಿ ವಾಸ ಇರುವುದರಿಂದ ಜನರ ಕಷ್ಟಗಳು ತಿಳಿದಿರುತ್ತೇನೆ . ಆದ್ದರಿಂದ ಮಂಜುನಾಥ ಸ್ವಾಮಿಯ ಆಶಿರ್ವಾದದಿಂದ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ . ನನ್ನ ದೂರವಾಣಿ ಸಂಖ್ಯೆ -7337674987
ನನಗೆ ನಗದು ವಹಿವಾಟು ಚೆನ್ನಾಗಿ ತಿಳಿದಿದೆ, ಆದ್ದರಿಂದ ನನಗೆ ನಗದು ಮೇಲ್ವಿಚಾರಕ ಹುದ್ದೆ ನೀಡಿ ಆಶೀರ್ವದಿಸಿ.
ಅಂಚೆ ವಿಳಾಸ – ಹೊಸಹಳ್ಳಿ ಲಕ್ಷ್ಮಿ ದೇವಸ್ಥಾನದ ಎದುರು ಮನೆ ಬುಕ್ಕಾಪಟ್ಟಣ (ಹೋಬಳಿ) ಸಿರಾ ( ತಾಲ್ಲೂಕು ) ತುಮಕೂರು (ಜಿಲ್ಲೆ)
ನಮಸ್ಕಾರ ನನ್ನ ಹೆಸರು ರವಿಕುಮಾರ್ ಆರ್. ನಾನು ವ್ಯವಸಾಯ. ಮಾಡಲು ಟೀಲ್ಲರ್ ತೆಗೆದುಕೊಳ್ಳಲು ಹಣಕಾಸಿನ ನೆರವು ಬೇಕಾಗಿದೆ. ಇತ್ತೀಚೆಗೆ ಕೋಳಿ ಸಾಕಾಣಿಕೆ ಬಗ್ಗೆ ಮಾಹಿತಿ ಓದಿದ್ದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕೊರುತ್ತೆನೆ 9740409532. ನನ್ನ ವಿಳಾಸ
ದೊಡ್ಡಬುಕ್ಕಸಾಗರ. ಬಿಸಲೇಹಳ್ಳಿ(ಪೊಸ್ಟ್) ಕಡೂರು {ತಾಲ್ಲೂಕು} ಚಿಕ್ಕಮಗಳೂರು (ಜಿಲ್ಲೆ)