ನವಣೆ ನೀಗಿಸಿತು ಬರದ ಭವಣೆ
Posted onದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಂಗಾಪುರ ಗ್ರಾಮ ಇಲ್ಲೋರ್ವ ರೈತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಿಂದ ಸಿರಿಧಾನ್ಯವಾದ ನವಣೆ ಬೆಳೆದು ಗೆದ್ದಿದ್ದಾರೆ. ಬಿದ್ದ ಕನಿಷ್ಠ ಮಳೆಯಲ್ಲಿಯೇ ಉತ್ತಮ ಇಳುವರಿ ಪಡೆದು ಬೀಗಿದ್ದಾರೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಂಗಾಪುರ ಗ್ರಾಮ ಇಲ್ಲೋರ್ವ ರೈತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಿಂದ ಸಿರಿಧಾನ್ಯವಾದ ನವಣೆ ಬೆಳೆದು ಗೆದ್ದಿದ್ದಾರೆ. ಬಿದ್ದ ಕನಿಷ್ಠ ಮಳೆಯಲ್ಲಿಯೇ ಉತ್ತಮ ಇಳುವರಿ ಪಡೆದು ಬೀಗಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದಲ್ಲಿಯ ಮರಿಕುಂಬಿಮಠ ಅವಿಭಕ್ತ ಕುಟುಂಬ ‘ಕೂಡಿಬಾಳಿದರೆ ಸ್ವರ್ಗ ಸುಖ’ ಅನ್ನುವಂತೆ ಅವಿಭಕ್ತ ಕುಟುಂಬದವರಂತೆ ಇತರರಿಗೆ ಅನುಕರಣೀಯರಾಗಿಹರು.
‘ಕ್ರಿಯಾಶೀಲತೆಯು ವೃಧ್ಧಾಪ್ಯವನ್ನು ಓಡಿಸುವುದರಲ್ಲಿ ಸಂಶಯವೇ ಇಲ್ಲ.’ ‘ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಎಂದೂ ಮುಪ್ಪಿಲ್ಲ’ ಎಂಬುದಕ್ಕೆ ಉದಾಹರಣೆಯೇ ಶ್ರೀಮತಿ ಸುರೇಖಾ ನಾಯ್ಕ. ಮೂಲತಃ ಮಂಗಳೂರಿನ ಪ್ರಾಂತ್ಯದವರಾದ ಇವರು ನೆಲಸಿರುವುದು ನವಲಗುಂದ ತಾಲ್ಲೂಕಿನ ಭದ್ರಾಪುರದಲ್ಲಿ.
ಸತತವಾಗಿ 3 ರಿಂದ 4 ವರ್ಷದವರೆಗೂ ಬರಲಾಲದ ಕ್ಷಾಮವನ್ನೆ ಅನುಭವಿಸುತ್ತಿರುವ ನವಲಗುಂದ ತಾಲ್ಲೂಕಿನ ಭದ್ರಾಪುರ ಗ್ರಾಮಸ್ಥರಲ್ಲಿ ಶ್ರೀಮತಿ ಶಂಕ್ರವ್ವ ಕೂಡಾ ಒಬ್ಬರು. ಇಳಿಯ ವಯಸ್ಸನ್ನು ಪರಿಗಣಿಸದೇ ಯಾವುದಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಕಳೆದ ವರ್ಷ ಪ್ರಾರಂಭಿಸಿಯೇ ಬಿಟ್ಟರು. ಈ ಚಿಂತನೆ ಮೂಡಿದ್ದು ಇವರಿಗೆ ಹೇಮಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ನೀಡಿದ ‘ಸ್ವ ಉದ್ಯೋಗ’ದ ಮಾಹಿತಿಯಿಂದ.
‘ಹೆಣ್ಣು ಅಬಲೆಯಲ್ಲ ಸಬಲೆ’ ಎಂಬ ವಿಚಾರವನ್ನು ಮನದಟ್ಟು ಮಾಡಿದವರು ಶ್ರೀಮತಿ ಅಮೀನಾರು. ಇವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನೆಲಸಿದ್ದು, ಕುಟುಂಬದಲ್ಲಿ ಸಾಕಷ್ಟು ನೋವನ್ನು ಅನುಭವಿಸಿ ಅದರಿಂದ ಹೊರಬರುವಲ್ಲಿ ಸಾಧಿಸಿ ಕುಟುಂಬದ ಆರ್ಥಿಕ ಸಂಕಷ್ಠವನ್ನು ಮೆಟ್ಟಿ ನಿಂತವರು.
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತು ಕೇಳಿದ್ದೇವೆ. ಆದರೆ ಮಾಡುತ್ತಿರುವ ಸ್ವಂತ ಉದ್ಯೋಗವನ್ನು ಪತಿಯಿಂದಲೇ ಮರೆಮಾಚಿ ಆರ್ಥಿಕ ಭದ್ರತೆ ರೂಪಿಸಿಕೊಂಡ ಲೀಲಾವತಿಯವರ ಕತೆಯನ್ನಮ್ಮೆ ನೀವು ಕೇಳಲೇಬೇಕು.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಎಂಬ ಊರಿನ ಶ್ರೀಯುತ ಮಂಜುನಾಥ್ ಎಂಬುವವರು ಸಮಗ್ರ ಕೃಷಿ ಅನುಷ್ಠಾನದೊಂದಿಗೆ ಗುಲಾಬಿ ಕೃಷಿಯಲ್ಲೂ ವಿಶೇಷ ಹೆಸರನ್ನು ಗಳಿಸಿದವರು. ಒಟ್ಟು ಎರಡು ಎಕರೆ ಹತ್ತು ಕುಂಟೆ ನೀರಾವರಿ ಜಮೀನನ್ನು ಹೊಂದಿರುವ ಮಂಜುನಾಥ್ ವಿಭಿನ್ನವಾದ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಬಂದ ಕೃಷಿಕ. ಸ್ವತಃ ಶ್ರಮ ಜೀವಿಯೂ ಆಗಿರುವ ಇವರು ತನ್ನ ಒಟ್ಟು ಜಮೀನಿನಲ್ಲಿ ಒಂದೂವರೆ ಎಕರೆ ಜಮೀನನ್ನು ವಿಶೇಷವಾಗಿ ಮಿಶ್ರ ಬೆಳೆ ಪದ್ದತಿಗೆ ತೊಡಗಿಸಿಕೊಂಡು ಅದರಲ್ಲಿ ಸೈ ಎನಿಸಿಕೊಂಡವರು. ಈ ಜಮೀನಿನಲ್ಲಿ ರೂಬಿ, […]
ಬಣ್ಣ ಬಣ್ಣದ ‘ಕುರುಕುರೆ’ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಬಡವರಿಂದ ಶ್ರೀಮಂತರವರಿಗೂ ಮನಸ್ಸನ್ನು ಸೂರೆಗೊಂಡಿರುವ ಖಾದ್ಯವೇ ಕುರು ಕುರೇ. ಅತೀ ಕಡಿಮೆ ಬೆಲೆಯಲ್ಲಿ ದೊರೆಯುವ ಈ ತಿನಿಸು, ಪ್ರಯಾಣ, ಪಾಟರ್ಿ ಮುಂತಾದ ಸಂದರ್ಭದಲ್ಲಿಯೂ ಸುಲಭವಾಗಿ ಹಗುರವಾಗಿ ಹೊತ್ತು ಸಾಗಲು ಕೂಡಾ ಸಾಧ್ಯ. ಸಂಪೂರ್ಣ ಶಾಖಾಹಾರಿ ಪದಾರ್ಥಗಳಿಂದ ಮಾಡಬಹುದಾದ ಕುರುಕುರೆ ಎಲ್ಲರ ಹೃದಯವನ್ನು ಕದ್ದಿರುವದಲ್ಲದೇ ವಿವಿಧ ಸುವಾಸನೆಗಳ, ರುಚಿಗಳೊಂದಿಗೆ ಮತ್ತು ಬೇರೆ ಬೇರೆ ಲೇಬಲ್ ಹೊತ್ತು ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಪೆಪ್ಸಿ ಕಂಪನಿಯವರು […]
ವಿವಾಹ ಎನ್ನುವುದು ಹೆಣ್ಣಿನ ಜೀವನದಲ್ಲಿ ಮಹತ್ವದಘಟ್ಟ. ಮೊದಲೇ ಯಾರು ಯಾರಿಗೆ ಎಂಬುದು ನಿರ್ಧರಿತವಾಗಿರುತ್ತದೆಂದು ಹೇಳುತ್ತಾರೆ. ಆದರೆ ಪ್ರತಿಯೊಬ್ಬ ಹೆಣ್ಣು ತನ್ನನ್ನು ವರಿಸುವವನಿಗೆ ಯಾವುದೇ ದುಶ್ಚಟಗಳಿರಬಾರದೆಂದು. ಒಳ್ಳೆಯ ರೀತಿಯಲ್ಲಿ ತನ್ನನ್ನು ನೋಡಿಕೊಳ್ಳಬೇಕೆಂದು ಕಂಡಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಾರೆ. ಇವರ ಇಷ್ಟಕ್ಕೆ ವಿರುದ್ದವಾಗಿಏನಾದರು ಪತಿ ಸಿಕ್ಕರೆ ಜೀವನವೇ ನರಕವೆಂಬಂತೆ ಭಾಸವಾಗುತ್ತದೆ. ಆದರೆ ಅದೇ ಜೀವನವನ್ನು ಪ್ರಯತ್ನ ಮಾಡಿ ಸಾರ್ಥಕತೆಗೊಳಿಸಿದರೆ ಸುಂದರ ಬದುಕು ನಮ್ಮದಾಗುತ್ತದೆ. ಅಂತದೊಂದು ಪ್ರಯತ್ನ ಮಾಡಿ ನೆಮ್ಮದಿಯ ನೆಲೆ ಕಂಡುಕೊಂಡ ಮಹಿಳೆ ನೂಲ್ವಿಗ್ರಾಮದ ಶ್ರೀಮತಿ ವಿಜಯಲಕ್ಷ್ಮೀ ಡೊಂಗರಗಾಮಿಯೊಬ್ಬರು. ತಾಯಿ […]